Pages

Tuesday, July 26, 2011

ಕುರ ಗಳಿತು ಒಡೆಯಲು ಒಳ್ಳೆ ಔಷಧಿ . . .

ಕುರದಿಂದ ನೋವನ್ನು ಅನುಭವಿಸುವ ಕೆಟ್ಟ ನೋವು ಮತ್ತೊಂದಿಲ್ಲ .. ಕುರ ಸರಿಯಾಗಿ ಗಳಿತು ಒಡೆದರೆ ಮತ್ತೆ ಬರುವುದಿಲ್ಲವಂತೆ . ಹಾಗಂತ ಒಮ್ಮೆ ಏನಾದರೂ ಸರಿಯಾಗಿ ಗಳಿಯದೆ ಒಡೆದರೆ ಮತ್ತೆ ಬರುವ ಸಂಭವವಿದೆ . ಪ್ರಾಕೃತಿಕವಾಗಿ ಕುರ ಗಳಿಯಲು ಅನೇಕ ದಿನ ಬೇಕು . ಅಲ್ಲಿಯವರೆಗಿನ ನೋವಿನ ಬೇನೆ ಬಹಳ ಕಷ್ಟ . ಕುರ ಗಳಿತು ಒಡೆದ ದಿನ ಮತ್ಹ್ತ್ಹೊಂದು ಜನ್ಮ ಪಡೆದ ಅನುಭವ !.
ಹಾಗಿದ್ದರೆ ನಾವು ಈಗ ಅಷ್ಟು ದಿನಗಳ ವರೆಗೆ ಕಾಯುವದು ಬೇಕಿಲ್ಲ .
ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಪ್ರಾಕ್ರುಥಿಕವಾಗಿಯೇ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ . :)

-------------------------------------------------------------------------------

ಬಿಳಿ ಚಿಬ್ಬಿಗೆ

ಕೆಲವೊಮ್ಮೆ ನಮ್ಮ ಮೈಮೇಲೆ ಬಿಳಿ ಬಿಳಿಯಾಗಿ ಚಿಬ್ಬಿ ಇರುತ್ತದೆ . ಇದರಿಂದ ದುಷ್ಪರಿಣಾಮ ಏನೂ ಇಲ್ಲದಿದ್ದರೂ ಬಿಳಿ ಕಲೆಗಳು ನಮ್ಮನ್ನು ಅಸಹ್ಯಗೊಲ್ಲುವಂತೆ ಮಾಡುತ್ತದೆ .
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಕಲ್ಲು ಶುಂಟಿ ಯನ್ನು ನಿಂಬೆ ಹಣ್ಣಿನೊಡನೆ ತ್ಯೇಯ್ದು ೫ ದಿನ ದಿನಕ್ಕೆರಡು ಬಾರಿಯಂತೆ ಹಚ್ಚಿ . ನಿಮ್ಮ ಮೈಮೇಲಿರುವ ಚಿಬ್ಬಿ ಮಂಗ ಮಾಯಾ .
- -------------------------------------

Thursday, June 9, 2011

ಹೊಟ್ಟೆ ಮುರಿತಕ್ಕೆ - ಬೇದಿಗೆ

ನಾವು ಅನೇಕ ಬಾರಿ ಹೊಟ್ಟೆ ಮುರಿತದ ಅನುಭವವನ್ನು ಬಹಳವಾಗಿ ಅನುಭವಿಸುತ್ತೇವೆ . ಇದು ಯಾವುದೇ ಆಹಾರ ತೊಂದರೆ ಆಗಿರಬಹುದು . ಅದರಲ್ಲೂ ನಮಗೆ ಎಲ್ಲಾದರೂ ಪ್ರಯಾಣ ಇರುವಾಗ ಈ ಹೊಟ್ಟೆ ಮುರಿತ ಪ್ರಯಾಣವನ್ನ ರದ್ದು ಗೊಳಿಸುವ ನಿರ್ಣಾಯಕ್ಕೆ ಎಡೆಮಾಡಿಕೊಡುತ್ತದೆ .


ಹೆದರುವ ಅವಶ್ಯಕತೆ ಇಲ್ಲ . ಕಾಡು ಅರಿಶಿನ ಅಥವಾ ಅರಾರೋಟನ್ನು ಒಂದು ಲೌಟ ಮಜ್ಜಿಗೆಗೆ ಹಾಕಿ ಕುಡಿದುಬಿಡಿನಿಮ್ಮ ಹೊಟ್ಟೆ ಮುರಿತ ಅಥವಾ ಬೇದಿಅನುಭವ ಬಂದ್ !!


- ಅಮರ ಕೆ ಜಿ ಕಾನುಗೋಡು .

Friday, December 17, 2010

ಹುಲ್ಕೂಡು ಗಣಪತಿ - ಎಲುಬು ಮುರಿತಕ್ಕೆ

ಸಾಗರ ತಾಲುಕ್ ಹುಲ್ಕೂಡು ಗಣಪತಿ ಇವರು ಎಲುಬು ಮುರಿತಕ್ಕೆ ಔಷಧಿಯನ್ನು ಕೊಡುತ್ತಾರೆ. ಕೈ ಕಾಲು ಹಾಗೂ ಇತರ ಎಲುಬು ಮುರಿತಕ್ಕೆ ಅತೀ ಉತ್ತಮವಾದ ಹಳ್ಳಿ ಔಷಧಿಯನ್ನ ಕೊಡುತ್ತಾರೆ . ಇವರು ಜಾನುವಾರಗಳಿಗೂ ಎಲುಬು ಮುರಿತಕ್ಕೆ ಔಷಧಿಯನ್ನ ಕೊಡುತ್ತಾರೆ.
ಊರು : ಸಾಗರ ತಾಲುಕ್ ಹುಲ್ಕೂಡು
ದೂರವಾಣಿ ಸಂಖ್ಯೆ : 08183 239978
--------------------------------------------------------------------------------------------

Thursday, December 16, 2010

ಶ್ರೀಮತಿ ಸಾವಿತ್ರಮ್ಮ , ದೊಡ್ಡೇರಿ -ಮಹಿಳೆಯರ ವೈಧ್ಯೆ

ಇವರ ಸುಮಾರು ನಲವತ್ತು ವರ್ಷಗಳ ಅನುಭವ ಬೆಚ್ಚಿ ಬೀಳಿಸುವಂತಹವು. ಮಕ್ಕಳನ್ನು ಪಡೆಯಲು ಎಲ್ಲಾ ದಂಪತಿಗಳಿಗೂ ಆಸೆ. ಆದರೆ ಕೆಲವೊಮ್ಮೆ ಅಸಾಧ್ಯ . ಇಂತಹ ಅನೇಕ ಸಮಸ್ಯೆ ಗಳಿಗೆ ಸಾವಿತ್ರಮ್ಮ ಔಷಧಿಯನ್ನ ಪರಿಪೂರ್ಣವಾಗಿ ಕೊಟ್ಟಿರುತ್ತಾರೆ . ಅವರು ತಾವು ಹಂಚಿಕೊಂಡ ತಮ್ಮ ಔಷಧಿಯ ಕಥೆಗಳು ಅಚ್ಚರಿಯಾಗಿತ್ತು .
ಅವರು ಮುಖ್ಯವಾಗಿ ಕೆಳಗೆ ತಿಳಿಸಿದವುಗಳಿಗೆ ಔಷಧಿಯನ್ನು ಕೊಡುತ್ತಾರೆ .
೧ ಬಂಜೆತನ ನಿವಾರಣೆಗೆ
೨ ಗಂಡಸರ ವೀರ್ಯಾಣು ಸಂಖ್ಯೆ ಹೆಚ್ಚಿಸಲು
೩ ಜಾಂಡಿಸ್
೪ ವೃತ್ತಿ ಹುಣ್ಣು - ಎಲ್ಲ ಬಗೆಯ ಲೂತಿ ಹುಣ್ಣು -ಸುಮಾರು ಮುಕ್ಕಾಲು ಭಾಗ ವಾಸಿಯಾಗುತ್ತದೆ
೫ ಮಕ್ಕಳ ಕೆಂಪಿನ ಕಜ್ಜಿ

ಊರು : ಸೊರಬ ತಾಲೂಕು ದೊಡ್ಡೇರಿ ಗ್ರಾಮ
ದೂರವಾಣಿ ಸಂಖ್ಯೆ : 08184 252529

ಶ್ರೀಯುತ ಡಿ ಆರ್ ಗಣಪತಿ, ದೊಡ್ಡೇರಿ. - ಗಂಟು ಕಸಕ್ಕೆ

ಸುಮಾರು ಮೂರು ತಲೆಮಾರಿನಿಂದ ಇವರ ಮನೆಯಲ್ಲಿ ಗಂಟು ಕಸಕ್ಕೆ ಔಷಧಿಯನ್ನ ಕೊಡುತ್ತಾ ಬಂದಿದ್ದಾರೆ. ಈ ತಲೆಮಾರಿನಲ್ಲಿ ಗಣಪತಿಯವರು ಸಾವಿರಾರು ಜನಗಳಿಗೆ ಔಷಧಿಯನ್ನು ಪರಿಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಕೊಟ್ಟಿರುತ್ತಾರೆ . ಇವರ ಅನುಭವದ ಮಾತುಗಳು ಅವರ ಔಷಧಿಯ ಪರಿಪೂರ್ಣತೆಯನ್ನು ಹೊರ ಹಾಕುತ್ತಿತ್ತು .
ಊರು : ಸೊರಬ ತಾಲೂಕ್ ದೊಡ್ಡೇರಿ
ದೂರವಾಣಿ ಸಂಖ್ಯೆ : 08184 252532

ಶ್ರೀ ಗಜಾನನ , ಮಂಚಾಲೆ

ಇವರು ಸಕ್ಕರೆ ಕಾಯಿಲೆಗೆ ಔಷಧಿ ಕೊಟ್ಟು ಪ್ರಸಿದ್ದರಾಗಿದ್ದಾರೆ . ಸಹಸ್ರಾರು ಜನರು ಇವರ ಔಷಧಿ ಪಡೆದು ಗುಣಮುಖರಾಗಿದ್ದಾರೆ . ಇವರು ಸಾಮಾನ್ಯವಾಗಿ ಭಾನುವಾರ ಔಷಧಿಯನ್ನು ಕೊಡುತ್ತಾರೆ. ಸಕ್ಕರೆ ಕಾಯಿಲೆ ಅಲ್ಲದೆ ಇವರು ಇನ್ನೂ ಹತ್ತು ಹಲವಾರು ಕಾಯಿಲೆಗಳಿಗೆ ಔಷಧಿಯನ್ನು ಕೊಡುತ್ತಾರೆ . ಕೆಲವನ್ನು ಇಲ್ಲಿ ಕೆಳಗೆ ಬರೆಯಲಾಗಿದೆ.
೧ ಸಕ್ಕರೆ ಕಾಯಿಲೆ
೨ ಗಾಂಗರಿನ್
೩ ಗ್ಯಾಸ್ಟ್ರಿಕ್
೪ ಶೀಥದ ಅಲರ್ಜಿ
೫ ಚರ್ಮದ ರೋಗಗಳು
೬ ಮಹಿಳೆಯರ ಕಾಯಿಲೆಗಳು
೭ ಬಂಜೆತನಕ್ಕೆ
೮ ಎಲ್ಲ ರೀತಿಯ uterous related eseases
ಊರು : - ಸಾಗರ ತಾಲೂಕು ಮಂಚಾಲೆ ಗ್ರಾಮ
ದೂರವಾಣಿ ಸಂಖ್ಯೆ : 08183 253 608 and 08183 295698