Pages

Sunday, November 25, 2012

ಮಲಬದ್ದತೆ ತೊಂದರೆ ಇದ್ದವರಿಗೆ .....


ಸೋನಾಮುಖಿ ಸೊಪ್ಪನ್ನು ಎರಡು ಚಮಚದಷ್ಟು ಪ್ರಮಾಣಕ್ಕೆ ಮೂರು ಲೋಟ  ನೀರು ಸೇರಿಸಿ ಒಂದುಲೋಟ ಪ್ರಮಾಣಕ್ಕೆ ಕುದಿಸಿ ಬತ್ತಿಸಿ ಕಷಾಯ ಮಾಡಿ ರಾತ್ರಿ ಮಲಗುವಾಗ ಕುಡಿಯಬೇಕು. ಸೊಪ್ಪನ್ನು ಹೆಚ್ಚು ಪ್ರಮಾಣದಲ್ಲಿ ಸೇರಿಸಿಕೊಂಡರೆ ಬೇದಿಯಾಗುವ ಅಪಾಯವಿದೆ .

ಗ್ರಂದಿಗೆ ಅಂಗಡಿಯಲ್ಲಿ ಸೋನಾಮುಖಿ ಸೊಪ್ಪು ದೊರೆಯುತ್ತದೆ

ಸಲಹೆ : ಎಂ ಗಣಪತಿ ಕಾನುಗೋಡು

Wednesday, August 15, 2012

ಬಾಯಿಯ ದುರ್ವಾಸನೆಗೆ .....

ನಮ್ಮ ಬಾಯಿ ವಾಸನೆ ಬರ್ತಾ ಇದ್ರೆ .. ಪ್ರತಿ ದಿನ ಮಲಗುವ ಮುನ್ನ ಉಪ್ಪು ನೀರನ್ನು ಮುಕ್ಕಳಿಸಿ ಮಲಗಿದರೆ ನಮ್ಮ ಬಾಯಿಯ ವಾಸನೆ ಸುಗಂದಬರಿತವಾಗುತ್ತದೆ ...

Tuesday, July 26, 2011

ಕುರ ಗಳಿತು ಒಡೆಯಲು ಒಳ್ಳೆ ಔಷಧಿ . . .

ಕುರದಿಂದ ನೋವನ್ನು ಅನುಭವಿಸುವ ಕೆಟ್ಟ ನೋವು ಮತ್ತೊಂದಿಲ್ಲ .. ಕುರ ಸರಿಯಾಗಿ ಗಳಿತು ಒಡೆದರೆ ಮತ್ತೆ ಬರುವುದಿಲ್ಲವಂತೆ . ಹಾಗಂತ ಒಮ್ಮೆ ಏನಾದರೂ ಸರಿಯಾಗಿ ಗಳಿಯದೆ ಒಡೆದರೆ ಮತ್ತೆ ಬರುವ ಸಂಭವವಿದೆ . ಪ್ರಾಕೃತಿಕವಾಗಿ ಕುರ ಗಳಿಯಲು ಅನೇಕ ದಿನ ಬೇಕು . ಅಲ್ಲಿಯವರೆಗಿನ ನೋವಿನ ಬೇನೆ ಬಹಳ ಕಷ್ಟ . ಕುರ ಗಳಿತು ಒಡೆದ ದಿನ ಮತ್ಹ್ತ್ಹೊಂದು ಜನ್ಮ ಪಡೆದ ಅನುಭವ !.
ಹಾಗಿದ್ದರೆ ನಾವು ಈಗ ಅಷ್ಟು ದಿನಗಳ ವರೆಗೆ ಕಾಯುವದು ಬೇಕಿಲ್ಲ .
ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಪ್ರಾಕ್ರುಥಿಕವಾಗಿಯೇ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ . :)

-------------------------------------------------------------------------------

ಬಿಳಿ ಚಿಬ್ಬಿಗೆ

ಕೆಲವೊಮ್ಮೆ ನಮ್ಮ ಮೈಮೇಲೆ ಬಿಳಿ ಬಿಳಿಯಾಗಿ ಚಿಬ್ಬಿ ಇರುತ್ತದೆ . ಇದರಿಂದ ದುಷ್ಪರಿಣಾಮ ಏನೂ ಇಲ್ಲದಿದ್ದರೂ ಬಿಳಿ ಕಲೆಗಳು ನಮ್ಮನ್ನು ಅಸಹ್ಯಗೊಲ್ಲುವಂತೆ ಮಾಡುತ್ತದೆ .
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಕಲ್ಲು ಶುಂಟಿ ಯನ್ನು ನಿಂಬೆ ಹಣ್ಣಿನೊಡನೆ ತ್ಯೇಯ್ದು ೫ ದಿನ ದಿನಕ್ಕೆರಡು ಬಾರಿಯಂತೆ ಹಚ್ಚಿ . ನಿಮ್ಮ ಮೈಮೇಲಿರುವ ಚಿಬ್ಬಿ ಮಂಗ ಮಾಯಾ .
- -------------------------------------

Thursday, June 9, 2011

ಹೊಟ್ಟೆ ಮುರಿತಕ್ಕೆ - ಬೇದಿಗೆ

ನಾವು ಅನೇಕ ಬಾರಿ ಹೊಟ್ಟೆ ಮುರಿತದ ಅನುಭವವನ್ನು ಬಹಳವಾಗಿ ಅನುಭವಿಸುತ್ತೇವೆ . ಇದು ಯಾವುದೇ ಆಹಾರ ತೊಂದರೆ ಆಗಿರಬಹುದು . ಅದರಲ್ಲೂ ನಮಗೆ ಎಲ್ಲಾದರೂ ಪ್ರಯಾಣ ಇರುವಾಗ ಈ ಹೊಟ್ಟೆ ಮುರಿತ ಪ್ರಯಾಣವನ್ನ ರದ್ದು ಗೊಳಿಸುವ ನಿರ್ಣಾಯಕ್ಕೆ ಎಡೆಮಾಡಿಕೊಡುತ್ತದೆ .


ಹೆದರುವ ಅವಶ್ಯಕತೆ ಇಲ್ಲ . ಕಾಡು ಅರಿಶಿನ ಅಥವಾ ಅರಾರೋಟನ್ನು ಒಂದು ಲೌಟ ಮಜ್ಜಿಗೆಗೆ ಹಾಕಿ ಕುಡಿದುಬಿಡಿನಿಮ್ಮ ಹೊಟ್ಟೆ ಮುರಿತ ಅಥವಾ ಬೇದಿಅನುಭವ ಬಂದ್ !!


- ಅಮರ ಕೆ ಜಿ ಕಾನುಗೋಡು .

Friday, December 17, 2010

ಹುಲ್ಕೂಡು ಗಣಪತಿ - ಎಲುಬು ಮುರಿತಕ್ಕೆ

ಸಾಗರ ತಾಲುಕ್ ಹುಲ್ಕೂಡು ಗಣಪತಿ ಇವರು ಎಲುಬು ಮುರಿತಕ್ಕೆ ಔಷಧಿಯನ್ನು ಕೊಡುತ್ತಾರೆ. ಕೈ ಕಾಲು ಹಾಗೂ ಇತರ ಎಲುಬು ಮುರಿತಕ್ಕೆ ಅತೀ ಉತ್ತಮವಾದ ಹಳ್ಳಿ ಔಷಧಿಯನ್ನ ಕೊಡುತ್ತಾರೆ . ಇವರು ಜಾನುವಾರಗಳಿಗೂ ಎಲುಬು ಮುರಿತಕ್ಕೆ ಔಷಧಿಯನ್ನ ಕೊಡುತ್ತಾರೆ.
ಊರು : ಸಾಗರ ತಾಲುಕ್ ಹುಲ್ಕೂಡು
ದೂರವಾಣಿ ಸಂಖ್ಯೆ : 08183 239978
--------------------------------------------------------------------------------------------

Thursday, December 16, 2010

ಶ್ರೀಮತಿ ಸಾವಿತ್ರಮ್ಮ , ದೊಡ್ಡೇರಿ -ಮಹಿಳೆಯರ ವೈಧ್ಯೆ

ಇವರ ಸುಮಾರು ನಲವತ್ತು ವರ್ಷಗಳ ಅನುಭವ ಬೆಚ್ಚಿ ಬೀಳಿಸುವಂತಹವು. ಮಕ್ಕಳನ್ನು ಪಡೆಯಲು ಎಲ್ಲಾ ದಂಪತಿಗಳಿಗೂ ಆಸೆ. ಆದರೆ ಕೆಲವೊಮ್ಮೆ ಅಸಾಧ್ಯ . ಇಂತಹ ಅನೇಕ ಸಮಸ್ಯೆ ಗಳಿಗೆ ಸಾವಿತ್ರಮ್ಮ ಔಷಧಿಯನ್ನ ಪರಿಪೂರ್ಣವಾಗಿ ಕೊಟ್ಟಿರುತ್ತಾರೆ . ಅವರು ತಾವು ಹಂಚಿಕೊಂಡ ತಮ್ಮ ಔಷಧಿಯ ಕಥೆಗಳು ಅಚ್ಚರಿಯಾಗಿತ್ತು .
ಅವರು ಮುಖ್ಯವಾಗಿ ಕೆಳಗೆ ತಿಳಿಸಿದವುಗಳಿಗೆ ಔಷಧಿಯನ್ನು ಕೊಡುತ್ತಾರೆ .
೧ ಬಂಜೆತನ ನಿವಾರಣೆಗೆ
೨ ಗಂಡಸರ ವೀರ್ಯಾಣು ಸಂಖ್ಯೆ ಹೆಚ್ಚಿಸಲು
೩ ಜಾಂಡಿಸ್
೪ ವೃತ್ತಿ ಹುಣ್ಣು - ಎಲ್ಲ ಬಗೆಯ ಲೂತಿ ಹುಣ್ಣು -ಸುಮಾರು ಮುಕ್ಕಾಲು ಭಾಗ ವಾಸಿಯಾಗುತ್ತದೆ
೫ ಮಕ್ಕಳ ಕೆಂಪಿನ ಕಜ್ಜಿ

ಊರು : ಸೊರಬ ತಾಲೂಕು ದೊಡ್ಡೇರಿ ಗ್ರಾಮ
ದೂರವಾಣಿ ಸಂಖ್ಯೆ : 08184 252529